ಸತ್ಯಕಾಮ ವಾರ್ತೆ ಗುರುಮಠಕಲ್ :
ತಾಲೂಕಿನ ಯಲೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿಯ ಸಣ್ಣಾಮೀರ ತಂ. ಸಾಬಣ್ಣಾ ಕಟಗಿ ಶಾಪುರ ವಿದ್ಯಾರ್ಥಿ ಹಾಗೂ ಸರ್ಕಾರಿ ಪ್ರೌಢ ಶಾಲೆ ಹತ್ತೀಗೂಡುರನ ಭಾಗ್ಯ ಶ್ರೀ ತಂ. ಭೀಮರಾಯ ಯಕ್ಷಂತೀ ಗ್ರಾಮದ 10ನೇ ತರಗತಿಯ ವಿದ್ಯಾರ್ಥಿನಿ ಯಾದಗೀರ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಸಭೆಯಿಂದ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಗೆ ಆಯ್ಕೆಯಾಗಿದ್ದಾರೆ.
ಇದೇ ದಿ 25.11.2024 ರಂದು ಕರ್ನಾಟಕ ರಾಜ್ಯ ದ ಸನ್ಮಾನ್ಯ ಮುಖ್ಯ ಮಂತ್ರಿಗಳ ಜೊತೆ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಯಾದಗಿರಿ ಜಿಲ್ಲಾ ಸಂಘಟಕರು ಹಾಗೂ ಅನಂತ ಸೇವಾ ಟ್ರಸ್ಟ ನ ನಿರ್ದೇಶಕರಾದ ಶರಣಪ್ಪ. ಎಸ್. ಕಂದಕೂರ ತಿಳಿಸಿದರು.
ಯಾದಗಿರಿ ಜಿಲ್ಲೆಯ ಮಕ್ಕಳ ಸಮಸ್ಯೆಗಳು ಹಾಗೂ ಅವರ ಅಭಿಪ್ರಾಯಗಳನ್ನು ಹೊತ್ತು ಜಿಲ್ಲೆಯ ಪ್ರತಿನಿದಿಗಳಾಗಿ ಭಾಗವಹಿಸಲಿದ್ದು ಈ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು ಸರ್ವ ಸಿಬ್ಬಂದಿ, ಎಸ್ ಡಿ ಎಮ್ ಸಿ ಅಧ್ಯಕ್ಷರು, ಹಾಗೂ ಎಲ್ಹೇರಿ, ಕಟ್ಟಿಗೆ ಶಾಪುರ್ ಹಾಗೂ ಯಕ್ಷಿಂತೀ, ಹತ್ತಿಗೂಡುರ್ ಗ್ರಾಮಸ್ಥರು ಅಭಿನಂದಿಸಿದ್ದಾರೆ.
- Advertisement -
——-
ಗ್ರಾಮೀಣ ಪ್ರದೇಶದ ಬಡ ಮತ್ತು ಪ್ರತಿಭಾವಂತ ಮಕ್ಕಳು ಇರುವದನ್ನು ಅನಂತ ಸೇವಾ ಟ್ರಸ್ಟ ಗುರುತಿಸುತ್ತಿದ್ದು ಇದೇ ತರಹ ಹೆಚ್ಚಿನ ಅವಕಾಶಗಳು ಬಡ ವಿದ್ಯಾರ್ಥಿಗಳಿಗೆ ಸಿಗಲಿ ಎಂದು ಸಂಯೋಜಕ ಆನಂದಕುಮಾರ ಬೂದಿ ಅನಂತ ಟ್ರಸ್ಟ್ ಆಶಿಸಿದ್ದಾರೆ.

