ಕಲಬುರಗಿ : ನಗರದ ಸಂತ ಗಾಡಗೆ ಬಾಬಾ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತ ಕಲಬುರಗಿ ಘಟಕದಿಂದ ಕಲಬುರಗಿ ಜಿಲ್ಲೆಯ ತಾಲ್ಲೂಕು ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ.ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೇಲ್ಲರ ಆದ್ಯ ಕರ್ತವ್ಯ ಎಂದು ಅದೇಶ ಪತ್ರ ನೀಡಿ ಗೌರವಿಸಿ.ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡೊಣ ಎಂದು ಕಲಬುರಗಿ ಜಿಲ್ಲಾಧ್ಯಕ್ಷರಾದ ಸಿ.ಎಸ್.ಪಾಟೀಲ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಸಲಹಾ ಸಮಿತಿಯ ಅಧ್ಯಕ್ಷರಾದ ಎ.ಕೆ.ರಾಮೇಶ್ವರ ,ಕಾರ್ಯದರ್ಶಿ ಮಲ್ಲಿಕಾರ್ಜುನ ರೋಣದ,ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ,ಖಜಾಂಚಿ ಭಾನುಕುಮಾರ ಗೀರೆಗೋಳ,ಮಹಿಳಾ ಪ್ರತಿನಿಧಿ ಮಹಾಲಕ್ಷ್ಮಿ ಪಾಟೀಲ,ಶಹಾಬಾದ ತಾಲ್ಲೂಕು ಅಧ್ಯಕ್ಷರಾದ ಎನ್.ಸಿ.ವಾರದ,ಸೇಡಂ ತಾಲ್ಲೂಕು ಅಧ್ಯಕ್ಷರಾದ ವೀರಯ್ಯ ಮಠಪತಿ,ಯಡ್ರಾಮಿ ತಾಲ್ಲೂಕು ಅಧ್ಯಕ್ಷರಾದ ಬಸವರಾಜ ಬೋರಗಿ,ಕಮಲಾಪುರ ತಾಲ್ಲೂಕು ಅಧ್ಯಕ್ಷರಾದ ಶ್ರೀಕಾಂತ ಪಾಟೀಲ,ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾರ್ಥನ ಗೀತೆ ಮಹಾಲಕ್ಷ್ಮಿ ಪಾಟೀಲ, ಸ್ವಾಗತ ಮಲ್ಲಿಕಾರ್ಜುನ ರೋಣದ,ನಿರೂಪಣೆ ಡಿ.ಪಿ.ಸಜ್ಜನ,ವಂದನಾರ್ಪಣೆ ಬಾನುಕುಮಾರ ಗೀರೆಗೊಳ ವಹಿಸಿದರು. ಎಂದು ಪತ್ರಿಕಾ ಪ್ರಕಟಣೆಗಾಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ ಅವರು ತಿಳಿಸಿದರು.

