ಸತ್ಯಕಾಮ ವಾರ್ತೆ ಯಾದಗಿರಿ:
ಮೋಟನಳ್ಳಿ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಸತ್ಯಕಾಮದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿ ಪ್ರೇಮ್ ಮೂರ್ತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸೆ.17(ಸೋಮವಾರ) ರಂದು “ಮೋಟನಳ್ಳಿ ವಸತಿ ಶಾಲೆಯ ಲ್ಲಿ ಸಾಲು ಸಾಲು ಸಮಸ್ಯೆಗಳು” ಕಣ್ಣಿದ್ದೂ ಕುರುಡರಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎಂಬ ಶೀರ್ಷಿಕೆಯಡಿ ಸತ್ಯಕಾಮ ಪ್ರಾದೇಶಿಕ ದಿನಪತ್ರಿಕೆ ಸುದ್ದಿಯನ್ನು ಪ್ರಕಟಿಸಿತ್ತು, ಇದರ ಆಧಾರದ ಮೇಲೆ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಅಲ್ಲಿನ ವಿದ್ಯಾರ್ಥಿಗಳ ಸಮುಖದಲ್ಲಿ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ತಿಳಿದುಕೊಂಡರು.
- Advertisement -
ಈ ವೇಳೆ ವಿದ್ಯಾರ್ಥಿಗಳು ಪ್ರಮುಖವಾಗಿ ಶುದ್ಧ ಕುಡಿಯುವ ನೀರು, ಪ್ರತೀ ತಿಂಗಳು ವಿದ್ಯಾರ್ಥಿಗಳಿಗೆ ಬರುವ ಕಿಟ್ ಸಿಗುತ್ತಿಲ್ಲ, ಬಯಲು ಶೌಚಯಲವೇ ಗತಿಯ ಬಗ್ಗೆ ಬಂದಂತಹ ಅಧಿಕಾರಿಗಳಿಗೆ ತಮ್ಮ ವಸತಿ ನಿಲಯದ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಆಪ್ತ ಸಮಾಲೋಚನಾ ಆಧಿಕಾರಿ ದೇವಪ್ಪ, ಪ್ರಿನ್ಸಿಪಾಲ್ ಸಿದ್ದಪ್ಪ, ವಾರ್ಡನ್ ಆದಯ್ಯ ಹಿರೇಮಠ್, ಶಿಕ್ಷಕ ಮೌನೇಶ್ ಮೊಟನಹಳ್ಳಿ, ಸುನೀಲ್ ಕುಮಾರ್ ಸೇರಿದಂತೆ ಇತರರು ಇದ್ದರು.
- Advertisement -

