ಪತ್ರಕರ್ತ ಪಿ ಎಂ ಮಣ್ಣೂರ್ ಈಗ ನೆನಪು ಮಾತ್ರ
ವಿಶೇಷ ಲೇಖನ : ಸುರೇಶ ಕೊಟಗಿ.
ಪತ್ರಿಕಾರಂಗದ ಅಪ್ರತಿಮ ವ್ಯಕ್ತಿತ್ವ, ಮಹಾನಚೇತನ ಶ್ರೀ ಪಿ ಎಂ ಮಣ್ಣೂರರವರು ಜುಲೈ 1 ಪತ್ರಿಕಾ ದಿನಾಚರಣೆಯಂದು ಜನಿಸಿದರು. ಅವರ ಬದುಕು ಎಲ್ಲರಿಗೂ ಆದರ್ಶಮಯವಾಗಿತ್ತು. 2023 ಜೂಲೈ 1 ಅವರ 79ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ತುಂಬಾ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲಾಗಿತ್ತು, ಇಂದು ಅದು ಇತಿಹಾಸ ಮಾತ್ರ.ಅನೇಕ ಗಣ್ಯರು, ಪತ್ರಕರ್ತರು, ಆಪ್ತರು ಹಾಗೂ ಮಿತ್ರರು ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮಣ್ಣೂರ್ ರವರ ಮಾತುಗಳು ಯುವ ಜನಾಂಗಕ್ಕೆ ಪತ್ರಕರ್ತರಿಗೆ ಧೈರ್ಯ, ಸಾಮರ್ಥ್ಯ ಮತ್ತು ಸ್ಪೂರ್ತಿ ತುಂಬುವ ಅವರ ಮನದಾಳದ ಮಾತುಗಳು ಇಂದಿಗೂ ಎಲ್ಲರ ಹೃದಯದಲ್ಲಿ ಹಚ್ಚು ಹಸಿರಾಗಿದೆ. ಪತ್ರಿಕಾ ರಂಗದ ಮಹತ್ವವನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದು ಪತ್ರಿಕಾ ಮಿತ್ರರಿಗೆ ಟಾನಿಕ್ ನೀಡಿದಂತೆ ಪರಿಣಮಿಸಿತು ಆ ದಿನ.
- Advertisement -
ಆದರೆ ದುರಾದುಷ್ಟಕರ ಜುಲೈ 1, 2024ರ ಜನ್ಮದಿನಕ್ಕೆ ಅವರಿಲ್ಲ, ಅವರ ನೆನಪು ಮಾತ್ರ. ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನು ನಮ್ಮಿಂದ ದೂರ ಹೋದ ಮೇಲೆ ಅರ್ಥವಾಗುತ್ತದೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪ್ರತಿದಿನ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಸತ್ಯಕಾಮ ಕಾರ್ಯಾಲಯಕ್ಕೆ ಬಂದು ಒಂದೆರಡು ಗಂಟೆ ಕಾರ್ಯಾಲಯದ ಕಾರ್ಯವನ್ನು ನೋಡಿಕೊಂಡು ಅವರ ಪುತ್ರ ಆನಂದರಿಗೆ ಪತ್ರಿಕೆಯತ್ತ ವಿಶೇಷ ಗಮನ ಹರಿಸಲು ಸೂಚಿಸುತ್ತಿದ್ದರು. ಅವರನ್ನು ಭೇಟಿಯಾಗಲು ಅವರ ಮಿತ್ರರು ಪತ್ರಕರ್ತರು ಬಂದು ಹೋಗುವ ವಾಡಿಕೆ, ಆ ಸಂದರ್ಭದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಎಂಥ ಮನುಷ್ಯರಿದ್ದರೆಂದರೆ, ಅವರ ಎದುರು ತಪ್ಪು ಮಾಡಿದ ಎಂತಹ ವ್ಯಕ್ತಿಯನ್ನು ಕ್ಷಮಿಸಿ ತಿಳಿ ಹೇಳುವ ದೊಡ್ಡ ಗುಣ ಅವರಲ್ಲಿತ್ತು. ಸತ್ಯಕಾಮ ಪತ್ರಿಕೆಯ ಸಿಬ್ಬಂದಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದರು. ಆದ ಕಾರಣ ಇಂದಿಗೂ ಸಿಬ್ಬಂದಿ ವರ್ಗ ಅವರೊಂದಿಗಿನ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಕಳವಳ ಪಡುತ್ತಾರೆ.
ಇದು ಪಿ ಎಂ ಮಣ್ಣೂರ್ ರವರು ನಡೆದು ಬಂದ ದಾರಿ. ಪತ್ರಿಕೆಯ ಜವಾಬ್ದಾರಿ ಹೊರೆ ಹೊತ್ತ ಅವರ ಪುತ್ರ ಶ್ರೀ ಆನಂದ ಮಣ್ಣೂರ ರವರು ತಂದೆಯವರ ಆಶೋತ್ತರ ಗಳ ಕಡೆಗೆ ಕಾಳಜಿ ವಹಿಸುತ್ತಾ ಅಪ್ಪಾಜಿಯವರು ಪತ್ರಿಕೆಯನ್ನು ರಾಜ್ಯಮಟ್ಟದ ಪತ್ರಿಕೆಯನ್ನಾಗಿ ಮಾಡುವ ಹಿರಿಯ ಗುರಿಯಾಗಿತ್ತು. ಇದು ಅನೇಕ ಸಲ ಚರ್ಚೆಗೂ ಬಂದಿದೆ. ಅವರ ಈ ಕನಸಿನ ಸಂಕಲ್ಪ, ಜವಾಬ್ದಾರಿಯಿಂದ ನಿಭಾಯಿಸಿ ನನಗೆ ಎಷ್ಟೇ ತೊಂದರೆ ಬಂದರೂ ನನಸಾಗಿ ಮಾಡುವ ಧ್ಯೇಯ ಹೊಂದಿದ್ದೇನೆ. ಅವರು ತೀರಿ ಹೋದಾಗಿನಿಂದ ಇಲ್ಲಿಯವರೆಗೆ ಅನೇಕ ಸಮಸ್ಯೆಗಳು ಎದುರಾಗಿವೆ ಕೆಲವು ಕಾಣದ ಕೈಗಳಿಂದ ತೊಂದರೆಗಳು ಎದುರಾಗುತ್ತಿವೆ. ಪರವಾಗಿಲ್ಲ, ಅಪ್ಪಾಜಿ ಅವರು ಭೌತಿಕವಾಗಿ ನನ್ನೊಂದಿಲ್ಲದಿದ್ದರೂ ಅವರ ಕೃಪಾಶೀರ್ವಾದ ದಿವ್ಯ ಚೇತನ ಶಕ್ತಿ ನನ್ನೊಂದಿಗೆ ಇದೆ ಬರುವ ಎಲ್ಲಾ ಸಮಸ್ಯೆಗಳಿಗೂ ಎದೆ ತಟ್ಟಿ ನಿಂತು ಪರಿಹಾರ ಕಂಡುಕೊಳ್ಳುವೆ. ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾ ನನಗೆ ಬೆನ್ನೆಲುಬಾಗಿ ಸಮಾಜದ ಶಕ್ತಿ, ಸ್ವತಹ ಜನರೇ ಬೆಂಬಲಕ್ಕೆ ನಿಂತಿದ್ದಾರೆ.
ಪ್ರಿಂಟ್ ಮೀಡಿಯಾದಲ್ಲಿ ಸಾಕಷ್ಟು ಸಾಧನೆ ಮಾಡಿದ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲೂ, ಸಾಮಾಜಿಕ ರಾಜಕೀಯ ಸಮಸ್ಯೆಗಳ ಬಗ್ಗೆ ಸಾಕಷ್ಟು ಸತ್ಯ ಸುದ್ದಿಗಳನ್ನು ಬಯಲಿಗೆಳೆದು ಗುಣಮಟ್ಟದ ಲೇಖನಗಳು ಹಾಗೂ ಸುದ್ದಿಗಳನ್ನು ಪ್ರಕಟಗೊಳಿಸುತ್ತಿರುವುದು ವಿಸ್ಮಯ. ರಾಜಕೀಯ ಮತ್ತು ಆಡಳಿತದ ಅವ್ಯವಸ್ಥೆಯಾಗರಕ್ಕೆ ಕನ್ನಡಿ ಹಿಡಿದಂತಾಗಿದೆ. ಸಮಾಜದ ಜಾಗೃತಿಗೆ ಪತ್ರಿಕೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಶ್ರಮಿಸುವೆ, ಇದೇ ನನ್ನ ದೃಢ ವಿಶ್ವಾಸ ವೀರ ಸಂಕಲ್ಪ ಎಂದು ಹೇಳಿದರು.

