- ಶಾಸ್ತಿçನಗರ ಮದನಪುರ ಸ್ಲಂ ನಿವಾಸಿಗಳ ಹೋರಾಟದ 220ನೇ ದಿನಕ್ಕೆ ಚಿತ್ರನಟ ಚೇತನ ಅಹಿಂಸಾ ಭೇಟಿ; ಬೆಂಬಲ
ಯಾದಗಿರಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಕಳೆದ 7 ತಿಂಗಳಿನಿAದ ನಡೆಸುತ್ತಿರುವ ಹೋರಾಟದ 220ನೇ ದಿನವಾದ ಶನಿವಾರ ಸಾಮಾಜಿಕ ಚಿಂತಕ, ಚಿತ್ರನಟ ಚೇತನ ಅಹಿಂಸಾ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರಭಾರತಿ [ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಶಾಸ್ತಿçನಗರದಲ್ಲಿ ವಾಸಿಸುತ್ತಿರುವ ಬಡವರು ಕೂಲಿಕಾರರು ಕಳೆದ 70 ವರ್ಷಕ್ಕೂ ಹಿಂದಿನಿAದ ಸರ್ಕಾರಿ ಜಾಗೆಯಲ್ಲಿಯೇ ವಾಸಿಸುತ್ತಿದ್ದು ಹಕ್ಕು ಪತ್ರ ನೀಡುವಂತೆ ಮಾಡಿದ ಹೋರಾಟ ನಿರಂತರವಾಗಿ ನಡೆಯುತ್ತಿದೆ ಆದರೆ ಭೂಮಾಫಿಯಾದವರ ಕಪಿಮುಷ್ಟಿಯಿಂದ ಸತ್ಯ ಹೊರಬರದೆ ಜನತೆಗೆ ಅನ್ಯಾಯವಾಗುತ್ತಿದೆ.
ಬಡ ಜನತೆಯ ಬಳಿ ಭೂಮಾಫಿಯಾದವರು ಷಡ್ಯಂತ್ರ ಮಾಡಿ ನಗರಸಭೆಗೆ ಎಸ್.ಎ.ಎಸ್ ತೆರಿಗೆ ಪಾವತಿಸುವ ವೇಳೆ ಪಕ್ಕದ ಖಾಸಗಿ ಜಮೀನು ಸರ್ವೇ ನಂ.ನ್ನು ಬರೆÀದು ತುಂಬಿಸಿಕೊAಡು ವಂಚಿಸಲಾಗಿದೆ ಇದರಲ್ಲಿ ಭೂ ಮಾಫಿಯಾಗಳ ಕೈವಾಡವಿದೆ ಎಂದು ಹೇಳಿ ಸಮಸ್ಯೆಯನ್ನು ವಿವರಿಸಿದರು.
ನಟ ಚೇತನ ಅಹಿಂಸಾ ಅವರು ಮಾತನಾಡಿ, ಬಡಜನರು ಮಳೆ, ಚಳಿ, ಬಿಸಿಲು ಎನ್ನದೆ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಡಳಿತ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕು ಎಂದು ಹೇಳಿದರು.
- Advertisement -
ಸುಮಾರು 50 ವರ್ಷಗಳಿಂದ ಸ್ಥಳದಲ್ಲಿ ವಾಸಿಸುತ್ತಿರುವ ಬಡ ಕೂಲಿಕಾರ ಜನಗಳಿಗೆ ಅವರ ಬೇಡಿಕೆ ಈಡೇರಿಸಲು ಹಿಂದೇಟು ಹಾಕಬಾರದು ಎಂದು ಒತ್ತಾಯಿಸಿದ ಅವರು ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಬಡಜನತೆಯ ಗೋಳು ಪರಿಹರಿಸಲು ಮುಂದಾಗಬೇಕೆAದು ನುಡಿದರು.
ಸುದೀರ್ಘ ಕಾಲದಿಂದ ವಾಸವಾಗಿರುವ ಸ್ಥಳದ ಬಗ್ಗೆ ಒಂದು ನಿರ್ಣಯಕ್ಕೆ ಬರಲು ಆಗುವುದಿಲ್ಲ ಎಂದರೆ ಸ್ಥಳೀಯ ಆಡಳಿತ ಹಾಗೂ ಸಂಬAಧಪಟ್ಟವರು ಜನತೆಯ ಅಹವಾಲು ಆಲಿಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ನುಡಿದರು.
ತದನಂತರ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರನ್ನು ಭೇಟಿ ಮಾಡಿ ಬಡ ಜನತೆಯ 220 ದಿನಗಳ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮಾತನಾಡುವುದಾಗಿ ತಿಳಿಸಿದ ಅವರು ಜನಪ್ರತಿನಿಧಿಗಳು ಜಿಲ್ಲಾಡಳಿತ ನಗರಾಡಳಿತಗಳು ಶಾಸ್ತಿçನಗರ ಜನಗಳ ನೋವಿಗೆ ಸ್ಪಂದಿಸಬೇಕೆAದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಂಗನಾಥ ಬಾಗ್ಲಿ, ಸೈದಪ್ಪ ಕೂಲೂರು, ಗಿರೀಶ ಚಟ್ಟೇರಕರ್, ರಮೇಶ ಕಟ್ಟಿಮನಿ ಸೇರಿದಂತೆ ಶಾಸ್ತಿçನಗರ ನಿವಾಸಿಗಳಾದ ಗೌರಮ್ಮ, ವಿಜಯಲಕ್ಷಿö್ಮÃ, ಗಂಗಮ್ಮ, ಮಹೆಬೂಬಿ, ಖಾಜಾಬಿ ಇನ್ನಿತರರು ಉಪಸ್ಥಿತರಿದ್ದರು.
- Advertisement -

