ಸತ್ಯಕಾಮ ವಾರ್ತೆ ಗುರುಮಠಕಲ್ :
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಜರುಗಿದೆ.
ಗುಂಜಲಮ್ಮ ಗಂಡ ಚಂದಪ್ಪ (58) ಮೃತ ದುರ್ದೈವಿಯಾಗಿದ್ದೂ, ಮನೆಯಲ್ಲಿದ್ದ ಗುಂಜಲಮ್ಮ ಅವರ ಸಹೋದರ ಚಂದ್ರಪ್ಪ ಅಮ್ಮಣ್ಣೋರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಘಟನೆಯು ಮಧ್ಯರಾತ್ರಿ 3 ಘಂಟೆ ಸುಮಾರಿಗೆ ಜರುಗಿದೆ ಎಂದು ಸ್ಥಳೀಯರು ತಿಳಿಸಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
- Advertisement -

